Author: ನ್ಯೂಸ್ ಬ್ಯೂರೋ

ಗಂಗೊಳ್ಳಿ : ಇಲ್ಲಿನ ಪಂಚಗಂಗಾವಳಿ ಬಳಗ ಇದರ ನೂತನ ಅಧ್ಯಕ್ಷರಾಗಿ ಸಂದೀಪ ಕೆ. ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಸಂಘದ ಅಧ್ಯಕ್ಷ ಜಿ.ಎನ್.ಸತೀಶ ಖಾರ್ವಿ ಅಧ್ಯಕ್ಷತೆಯಲ್ಲಿ ಜರಗಿದ ಸಂಘದ ೨೧ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೌಪರ್ಣಿಕ ಬಸವ ಖಾರ್ವಿ (ಗೌರವಾಧ್ಯಕ್ಷ), ಬೋರಕಾರ್ ಮಾಧವ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ಮಾಧವ ಗೋವಿಂದ ಖಾರ್ವಿ, ಜಿ.ಕೆ.ಶ್ರೀನಿವಾಸ ಖಾರ್ವಿ, ಜಗನ್ನಾಥ ಖಾರ್ವಿ, ನಾರಾಯಣ ಖಾರ್ವಿ (ಉಪಾಧ್ಯಕ್ಷರು), ಜಿ.ಎನ್.ದಿಲೀಪ ಖಾರ್ವಿ (ಕಾರ್ಯದರ್ಶಿ), ಜಿ.ಎಂ.ರಾಘವೇಂದ್ರ ಖಾರ್ವಿ, ಚೇತನ ಖಾರ್ವಿ, ಸಜಿತ್ ಬಿ. (ಜತೆ ಕಾರ್ಯದರ್ಶಿ), ಎಂ.ಕೆ. ನಾಗರಾಜ ಖಾರ್ವಿ (ಖಜಾಂಚಿ), ಶಿಪಾ ಸಂತೋಷ ಖಾರ್ವಿ (ಲೆಕ್ಕ ಪರಿಶೋಧಕ), ಬಿ.ನಾಗರಾಜ ಖಾರ್ವಿ, ಅನಂತ ಖಾರ್ವಿ, ಸುಧಾಕರ ಖಾರ್ವಿ, ಸನತ್ ಖಾರ್ವಿ, ಬಿ.ಸಂತೋಷ ಖಾರ್ವಿ, ಬಿ.ರಾಮನಾಥ ಖಾರ್ವಿ (ಕ್ರೀಡಾ ಕಾರ್ಯದರ್ಶಿಗಳು), ಕೆ.ರಾಕ ಖಾರ್ವಿ, ಶಿಪಾ ನಾಗ ಖಾರ್ವಿ, ಜೋಗಿ ಸಂತೋಷ ಖಾರ್ವಿ, ಅಣ್ಣಪ್ಪ ಖಾರ್ವಿ, ಕೆ.ರಾಘವೇಂದ್ರ ಖಾರ್ವಿ, ಮಂಜುನಾಥ ಖಾರ್ವಿ, ಸಚಿನ್, ರೋಶನ್, ಕೀರ್ತನ (ಕಾರ್ಯಕಾರಿ ಸಮಿತಿ ಸದಸ್ಯರು), ನಾಗರತ್ನ,…

Read More

ಕುಂದಾಪುರ: ಹ್ವಾಯ್ ಈ ಸಾರ್ತಿ ಕೊಡಿ ಹಬ್ಬದಾಂಗೆ ಕಂಡಾಪಟಿ ಜನು ಇತೇ. ಬಂದ್ ಮಕ್ಳೆಲ್ಲ ಸೆಲ್ಫಿ ತೆಕ್ಕಂಬುದ್ರಲ್ ಬಿಜಿ ಕಾಣಿ. ಹೌದು. ಕುಂದಾಪುರ ಮೂಲದ ಕಾಣಿ ಸ್ಟುಡಿಯೋ ಬೆಂಗಳೂರು ಆಶ್ರಯದಲ್ಲಿ ಕೋಟೇಶ್ವರ ರೋಟರ್‍ಯಾಕ್ಟ್ ಕ್ಲಬ್, ರೋಟರಿ ಕ್ಲಬ್, ಕೆನರಾ ಕಿಡ್ಸ್, ಐಶ್ವರ್ಯ ಸ್ಟುಡಿಯೋ, ರಾಮನಾಥಗೋಲಿಕಟ್ಟೆ ಫ್ರೆಂಡ್ಸ್ ಸಹ ಪ್ರಾಯೋಜಕತ್ವದಲ್ಲಿ ಜರುಗಿದ ಕೋಟೇಶ್ವರ ಕೊಡಿ ಹಬ್ಬಲೊಂದು ಸೆಲ್ಫಿ ಹಬ್ಬ ಸೆಲ್ಫಿ ಜನರ ಪ್ರಶಂಸೆಗೆ ಪಾತ್ರವಾಯಿತು. ಸ್ಪರ್ಧೆಯಲ್ಲಿ ಸಾರ್ವಜನಿಕರು ಹಬ್ಬ ಮೂಲೆ ಮೂಲೆಯಲ್ಲಿಯೋ ವಯಸ್ಸಿನ ಇತಿಮಿತಿ ಇಲ್ಲದೆ ಸೆಲ್ಫಿ ತಗೆದುಕೊಳ್ಳುತ್ತಿದ್ದ ದೃಶ್ಯ ಕಾಣುತ್ತಿತ್ತು. ಈ ಸಲದ ಕೊಡಿ ಹಾಗೂ ಮಾರಟದ ಮಳಿಗೆಗಳ ಜತೆಗೆ ಮೊಬೈಲ್, ಟ್ಯಾಬ್, ಗೇಜೆಟ್‌ನಲ್ಲಿ ಸೆಲ್ಫಿ ಪೋಟೋ ತಗೆದುಕೊಳ್ಳತ್ತಿದ್ದ ದೃಶ್ಯ ಅಲ್ಲಲ್ಲಿ ಕಣ್ಣಿಗೆ ನೊಡಲು ಸಿಗುತ್ತಿತ್ತು.

Read More

ಮೂಡಬಿದಿರೆ: ನಮ್ಮ ವಚನಕಾರರು ತಮ್ಮ ಪ್ರಕರವಾದ ವಿಚಾರದಿಂದ,  ಕೀರ್ತನಕಾರರು ನಯವಾದ ಪದಗಳಿಂದ ಸಮಾಜದ ಆಗುಹೋಗುಗಳ ಬಗ್ಗೆ ಬರೆಯುತ್ತಲೇ ಬಂದಿದ್ದಾರೆ. ಅಂದಿನಿಂದಲೂ ಜನರು ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ಹೊಸತನದ ಹುಡುಕಾಟವೆಂಬುದು ಅಂದೇ ಆರಂಭವಾಗಿದೆ ಎಂದು ಡಾ. ಕೃಷ್ಣಮೂರ್ತಿ ಹನೂರು ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಮಧ್ಯಕಾಲಿನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು. ವಚನ ಕೀರ್ತನೆಗಳ ಮೂಲಕ ಮಧ್ಯಕಾಲಿನ ಸಾಹಿತ್ಯ ಇಂದಿಗೂ ಪ್ರಸ್ತತವಾಗಿದ್ದರೇ ಅದು ಹೊಸತನದ ರೂಪಾಂತರವೇ ಆಗಿದೆ ಎಂದವರು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ರ್ತೀ, ಡಾ. ನಾ. ದಾಮೋದರ್ ಉಪಸ್ಥಿತರಿದ್ದರು.

Read More

ಮೂಡಬಿದಿರೆ: ಹಳೆಗನ್ನಡ ಸಾಹಿತ್ಯಕ್ಕೆ ಅಸ್ತಮ ಎನ್ನುವುದಿಲ್ಲ. ಅದು ಎಲ್ಲಾ ಕಾಲದಲ್ಲೂ ಪ್ರತಿಪಲಿಸಲ್ಪಡುತ್ತದೆ. ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಎಲ್ಲಾ ಕವಿಗಳ ತಮ್ಮ ಸಾಹಿತ್ಯದಲ್ಲಿ ಹೊಸತನವನ್ನು ಕಟ್ಟಿಕೊಡುವ ಮತ್ತು ಅದು ಸದಾ ಕಾಲ ಪ್ರಸ್ತುವಾಗುವ ವಸ್ತು ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ ಡಾ. ಎನ್. ಎಸ್. ತಾರಾನಾಥ್ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು.

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಡಾ. ವಿ. ಎಸ್. ಆಚಾರ್ಯ ವೇದಿಯಕೆಯಲ್ಲಿ ಬ್ರಹ್ಮಾವರ ರಘುನಂದನ್ ಭಟ್ ಮತ್ತು ಬಳಗದಿಂದ ಲಘು ಶಾಸ್ರ್ತೀಯ ಸಂಗೀತ ಕಾರ್ಯಕ್ರಮ ಜರುಗಿತು.

Read More

ಮೂಡುಬಿದಿರೆ: ಸಮಾಜ ಒಗ್ಗೂಡಬೇಕೆಂದಿದ್ದರೆ ಸಮಾನತೆ ಇರಬೇಕು. ಅಸಮಾನತೆಯನ್ನೇ ವಿವಿಧತೆಯಲ್ಲಿನ ಏಕತೆ ಎಂದು ನಮ್ಮನ್ನು ದಿಕ್ಕು ತಪ್ಪಿಸಲಾಗಿದೆ. ನಮ್ಮದು ಸಮಸ್ತರೂ ಸೇರದ ಸಮಾಜವಾಗಿರದೇ ಜಾತಿ, ಧರ್ಮ, ಮತ ಪಂಥದ ಆಧಾರದಲ್ಲಿ ವಿಭಜಿಸಲಾಗಿದೆ ಎಂದು ಚಿಂತಕ ನಿತ್ಯಾನಂದ ಶೆಟ್ಟಿ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಸಾಮಾಜಿಕ ನ್ಯಾಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ಭಾತರದಂತಹ ದೇಶಗಳಲ್ಲಿ ಸಾಮಾಜಿಕ ನ್ಯಾಯ ಹೊಟ್ಟೆ ಪಾಡಿನ ಪ್ರಶ್ನೆಯಾಗಿ ಉಳಿದಿಲ್ಲ. ಜಾತಿ ವ್ಯವಸ್ಥೆಯಲ್ಲಿನ ತಪ್ಪು ಕಲ್ಪನೆಯಿಂದಾಗಿ ಒಂದೊಂದು ಜಾತಿ ಒಂದೊಂದು ರಾಷ್ಟ್ರವೆಂಬ ಕಲ್ಪನೆ ಮೂಡುತ್ತಿದೆ. ಸಾಮಾಜಿಕ ನ್ಯಾಯದ ಅಂತಿಮ ಉದ್ದೇಶ ಜಾತಿ ಹಾಗೂ ಅಸಮಾನ ಸಂಬಂಧಗಳನ್ನು ತೊಡೆದುಹಾಕುವುದೇ ಆಗಿದೆ ಎಂದ ಅವರು ನಾವೆಲ್ಲರೂ ಭಾರತೀಯರು ಎಂಬುವುದಕ್ಕಿಂತ ಮೊದಲು ನಾವೆಲ್ಲರೂ ಮನುಷ್ಯರು ಎಂಬುದನ್ನು ಅರಿಯಬೇಕಾಗಿದೆ ಎಂದರು. ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ವೇದಿಕೆಯಲ್ಲಿದ್ದರು.

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಡಾ. ವಿ. ಎಸ್. ಆಚಾರ್ಯ ವೇದಿಕೆಯಲ್ಲಿ ಬೆಂಗಳೂರಿನ ಮೈತ್ರಿರಾವ್  ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.

Read More

ಮೂಡುಬಿದಿರೆ: ಒಂದಲ್ಲಾ ಒಂದು ಕಾರಣಗಳಿಗಾಗಿ ವಿಶಿಷ್ಯತೆಯನ್ನು ಕಾಯ್ದುಕೊಂಡು ಬಂದಿರುವ ಆಳ್ವಾಸ್ ನುಡಿಸಿರಿ ಕಲೆ-ಸಾಹಿತ್ಯ-ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಆಧುನಿಕತೆಗೆ ಸಿಕ್ಕಿ ಅದೆಷ್ಟೋ ಕಲೆಗಳು ನುಡಿಯಲ್ಲಿ ಸ್ಥಾನ ಪಡೆಯುವುದು ವಿಶೇಷ. 12ನೇ ಆಳ್ವಾಸ್ ನುಡಿಸಿರಿಯಲ್ಲಿ ನಾವು ಯಾವುದೇ ಮೂಲೆಗೆ ಹೋದರೂ ಸಹ ಅಲ್ಲಿ ಭಾವಗೀತೆ, ಜಾನಪದ ಗೀತೆ, ದಾಸರ ಕೀರ್ತನೆಗಳು ನಮ್ಮ ಕಿವಿಗೆ ಇಂಪನ್ನು ಬೀರುತ್ತಿವೆ. ಇದಕ್ಕೆ ಕಾರಣೀಭೂತರು ಆವರಣದ ವಿವಿದೆಡೆಗಳಲ್ಲಿ ಕಾಣಸಿಗುವ ಕೀರ್ತನ ಗಾಯಕರು. ಶಿವಕುಮಾರ ಬಿರಾಲಿಯವರ ನೇತೃತ್ವದಲ್ಲಿ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕೊಪ್ಪಳ, ಧಾರವಾಡ ಹೀಗೆ ನಾನಾ ಜಿಲ್ಲೆಗಳಿಂದ ಒಟ್ಟು ಎಂಟು ತಂಡಗಳು ಆಳ್ವಾಸ್ ನುಡಿಸಿರಿಯ ಆವರಣಕ್ಕೆ ಆಗಮಿಸಿವೆ. ಇವರು ಬೆಳಗ್ಗೆ ಎಚಿಟರಿಂದ ಸಂಜೆ ಐದು ಗಂಟೆಯವರೆಗೆ ತಮ್ಮ ಗಾಯನದ ಕಂಪನ್ನು ಪಸರಿಸುತ್ತಿದ್ದಾರೆ. – ಅಪಾರ ಉಜಿರೆ

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಬೆಂಗಳೂರು ದಿವಾಕರ ಕಶ್ಯಪ್ ಮತ್ತು ಬಳಗದಿಂದ ನಡೆದ ಸಂಗೀತ ಸಾಧನಾ ಕಾರ್ಯಕ್ರಮ ಮುಂಜಾನೆಯ ಚಹಾ ಸವಿದು ಕುಳಿತವರಿಗೆ ಇಂಪು ನೀಡಿತು.

Read More

ಬೈಂದೂರು: ಇಲ್ಲಿನ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಗುರುವಾರ ಸಡಗರ ಸಂಭ್ರಮದಿಂದ ಜರುಗಿತು. ದೇವಳದ ಕಾರ್ಯನಿರ್ವಹಣಾಕಾರಿ ಟಿ. ಜಿ. ಸುಧಾಕರ್ ಅವರ ಉಸ್ತುವಾರಿ ಹಾಗೂ ಗೋಕರ್ಣದ ತಂತ್ರಿ ಹಿರೇಗಂಗೆ ಗಣಪತಿ ಭಟ್ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಈ ಸಾಲಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ.೨೧ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ದೇವಳದ ಮನವಿ…

Read More