Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಶ್ರೀ ಮಾತಾ ಆಸ್ಪತ್ರೆಯಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಮಾನಸಿಕ ರೋಗ ಎಂಬುದು ವ್ಯಕ್ತಿಯ ಮನಸ್ಸಿನ ರೋಗವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಭೌತಿಕ, ಶೈಕ್ಷಣಿಕ ಪ್ರಭಾವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಮನೋ ವೈದ್ಯಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆದು, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಒಂದು ಅಂದಾಜಿನ ಪ್ರಕಾರ ನಮ್ಮ ಜೀವನದ ಶೇಕಡಾ ೭೦ ರಷ್ಟು ಭಾಗವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಿತ್ತೂರು ಜೆಸಿಐ ಸಮೂಹದ ಸಮಾರೋಪ ಸಮಾರಂಭ ಮಾರಣಕಟ್ಟೆ ವಾಸುಕೀ ಸಭಾಭವನದಲ್ಲಿ ನೆಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೆ.ಸಿ.ಐ ಅದ್ಯಕ್ಷ ಅನಿಲ್ ಕುಮಾರ ಶೆಟ್ಟಿ ವಹಿಸಿದರು. ಮಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜೆ.ಸಿ.ಐ , ಎನ್ನುವ ಸಂಸ್ಥೆಗಳು ಹೆಚ್ಚು ತರಭೇತಿ ನೀಡುವುದರಿಂದ ಯುವಕರಲ್ಲಿರುವ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ತನ್ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ಮಾಜಿ ಆಡಳಿತ ಧರ್ಮದರ್ಶಿ ಬಿ.ಎಮ್.ಸುಕುಮಾರ ಶೆಟ್ಟಿ ,ಪತ್ರಕರ್ತ ಕೆ.ಸಿ. ರಾಜೇಶ ,ಮೈಸುರು ಉದ್ಯಮಿ ಕೆ.ಭಾಸ್ಕರ್ ಶೆಟ್ಟಿ ಕೆರೆಕೊಡ್ಲು , ಜೆಸಿಐ ಸ್ಥಾಪಕ ಅದ್ಯಕ್ಷ ಉದಂi .ಜಿ. ಪೂಜಾರಿ , ನಿಕಟ ಪೂರ್ವ ಅದ್ಯಕ್ಷ ಗೋವರ್ಧನ ಜೋಗಿ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರ ಸಂತೋಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡರ್ಕಾರ್ಸ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ “ವನಶ್ರೀ” ಸಹಯೋಗದಲ್ಲಿ ಡಿಜಿಟಲ್ ಗಾರ್ಡನ್ – ಎ ನ್ಯೂ ಅಪ್ರೋಚ್ ಇನ್ ಪ್ಲಾಂಟ್ ಕನ್ಸರ್ವೇಶನ್” ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಸೆಮಿನಾರ್ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಹೊಸ ಹೊಸ ಆವಿಷ್ಕಾರಗಳು ಮತ್ತು ವಸ್ತು-ವಿಷಯಗಳು ಇಂದಿನ ಯುವ ಜನಾಂಗದ ಮುಂದಿದೆ. ನಮ್ಮ ಸಂಶೋಧನಾತ್ಮಕತೆಯನ್ನು ಮತ್ತು ಜ್ನಾನವನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ತಂತ್ರಜ್ನಾನದ ನೆಲೆಯಲ್ಲಿ ಅವಕಾಶಗಳಿವೆ. ಅದನ್ನು ಹೆಚ್ಚೆಚ್ಚು ನಮ್ಮ ತಿಳುವಳಿಕೆ ಮತ್ತು ಕಲಿಯುವಿಕೆಯಲ್ಲಿ ಉಪಯೋಗಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಮತ್ತು ಜ್ನಾನಾಭಿವೃದ್ಧಿಯಾಗುತ್ತದೆ. ಅಲ್ಲದೇ ಮಾನವೀಯ ನೆಲೆಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಅಷ್ಟೇ ಮುಖ್ಯವಾಗಿರುತ್ತದೆ. ಮಾನವೀಯತೆಯನ್ನು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇಂದಿಗೂ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಹಬ್ಬಹರಿದಿನಗಳನ್ನು ಆಚರಿಸಿಕೊಳ್ಳಲು ಬಹಳ ಕಷ್ಟಪಡುತ್ತಿದ್ದು, ಇತರರಂತೆ ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯಿಂದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿ ಸುಮಾರು ೧೨ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು. ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಕುಂದಾಪುರ ತಾಲೂಕು ಹವ್ಯಕ ಸಭಾದ ೧೭ನೇಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭವು ಉಪ್ಪುಂದ ಶ್ರೀ ರಾಘವೆಂದ್ರ ಸ್ವಾಮೀ ಮಠದಲ್ಲಿ ಇತ್ತೀಚಿಗೆ ಜರಗಿತು. ಉಡುಪಿ ಜಿಲ್ಲಾ ಹವ್ಯಕ ಪರಿಷತ್ತಿನ ಉಪಧ್ಯಕ್ಷರಾದ ಗುಣವಂತೇಶ್ವರ ಭಟ್ ಮಾತನಾಡಿ ಸಂಘಟನೆಗಳು ಸಮಾಜದ ಬೆಳವಣೆಗೆಗೆ ಪೂರಕವಾಗಬೇಕು ಹಾಗೂ ಎಲ್ಲರನ್ನೂ ತಲಪುವಂತರಾಗಬೇಕು ಮತು ನಿರಂತರತೆಯನ್ನು ಕಾಯ್ದು ಕೊಳ್ಳಬೇಕಾಗಿದೆ. ಸಂಘಟನೆಯ ಆರ್ಥಿಕ ಸದೃಡತೆಗಾಗಿ ಪ್ರತಿಯೊಬ್ಬರಿಗೆ ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜದ ಕಾರ್ಯಕ್ಕೆ ಮತ್ತು ಧರ್ಮ ಕಾರ್ಯಗಳಿಗೆ ವಿನಿಯೋಗಿಸಬೇಕು ಇದರಿಂದಾಗಿ ಬದುಕು ಸಾರ್ಥಕತೆ ಹೊಂದಲು ಸ್ಯಾಧವಾಗಲಿದೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದ ತಂತ್ರಿ ಮತ್ತು ಹಾಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ವೇದಮೂರ್ತಿ ಮಂಜುನಾಥ ಅಡಿಗ ಕೊಲ್ಲೂರು ಮತ್ತು ಪಾಕಶಾಸ್ತ್ರ ಪ್ರವೀಣ ಬೈಂದೂರು ಶ್ರೀಧರ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದ ಅಂಗವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೨ ಅಂಕಗಳೊಂದಿಗೆ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಚಿನ್ಮಯ ವಂಡ್ಸೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅರೆಶಿರೂರು ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರೆಹೊಳೆ ಶಿವರಾಮ ಮಧ್ಯಸ್ಥ ತಮ್ಮ ಅಧ್ಯಾಪನ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಘಟ್ಟವನ್ನು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿರಿಮೆಯನ್ನು ತನ್ನ ಸಾಧನೆಗೆ ಕಾರಣರಾದವರನ್ನು ಸ್ಮರಿಸಿ ಗೌರವಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಗುರುಗಳು, ಹಿರಿಯರು, ಗೆಳೆಯರು, ಬಂಧುಗಳ ನೆರವಿನಿಂದ ಏರ್ಪಡಿಸಿ ಸಾರ್ಥಕ ಕ್ಷಣ ಅನುಭವಿಸಿದರು. ಎಲ್ಲರ ಹರಕೆ, ಹಾರೈಕೆ ಸ್ವೀಕರಿಸಿದರು. ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ರವಿವಾರ ನಡೆದ ಕಾರ್ಯಕ್ರಮದ ಹಿರಿತನ ವಹಿಸಿದವರು ಮಧ್ಯಸ್ಥರನ್ನು ಮುಖ್ಯೋಪಾಧ್ಯಾಯರಾಗಿ ನೇಮಕ ಮಾಡಿದ್ದ ಕೊಲ್ಲೂರು ದೇವಳದ ಅಂದಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು. ಶಿವರಾಮ ಮಧ್ಯಸ್ಥ ಶಿಕ್ಷಕ ತರಬೇತಿಯ ಅವಧಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯು. ರಾಘವೇಂದ್ರ ಐತಾಳ್ ಅವರಿಗೆ ಗುರು ನಮನ ಸಲ್ಲಿಸಿದರು. ಅವರ ಪ್ರಾಥಮಿಕ ಶಿಕ್ಷಣದ ಗುರುಗಳಾದ ಮಹಾಲಿಂಗ ಕೊಠಾರಿ, ಎಂ. ಜಿ. ಹೆಗಡೆ, ಗೋಪಾಲ ಶೆಟ್ಟಿ, ಪ್ರೌಢ, ಪದವಿಪೂರ್ವ ಹಂತದಲ್ಲಿ ಬೋಧಿಸಿದ್ದ ಸಿ. ಸೀತಾರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಲ್ವಾಡಿಯಿಂದ ಕಂಡ್ಲೂರು ಕಡೆಗೆ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ತಡೆಯಲೆತ್ನಿಸಿದ ಸಂದರ್ಭ ಪೊಲೀಸ್ ಪೇದೆಯೋರ್ವ ಗಾಯಗೊಂಡ ಘಟನೆ ಕಂಡ್ಲೂರಿನಲ್ಲಿ ನಡೆದಿದೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೨೫ ದನಗಳ ಪೈಕಿ ೧೧ ದನಗಳು ಮೃತಪಟ್ಟಿವೆ. ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತಾಲೂಕಿನ ಗುಲ್ವಾಡಿ ಕಡೆಯಿಂದ ಬಸ್ರೂರು ಮೂಲಕ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಗುಲ್ವಾಡಿ ಸೇತುವೆ ಮೇಲೆ ವಾಹನವನ್ನು ಪೊಲೀಸರು ಅಡ್ಡ ಹಾಕಿದ್ದರು. ಆದರೆ ಅಲ್ಲಿ ವಾಹನ ನಿಲ್ಲಿಸದೇ ಪರಾರಿಯಾದ ಆರೋಪಿಗಳು ಬಸ್ರೂರು ಮೂಲಕ ಕಂಡ್ಲೂರು ಕಡೆಗೆ ತೆರಳಿದ್ದರು. ಕಂಡ್ಲೂರಿನಲ್ಲಿ ಗ್ರಾಮಾಂತರ ಪೊಲೀಸರು ಠಾಣೆ ಎದುರು ಸಿಬ್ಬಂದಿಗಳಾದ ಅಶೋಕ್ ಮತ್ತು ಪ್ರಶಾಂತ್ ನಾಗಣ್ಣ ಬ್ಯಾರಿಕೆಡ್ ಅಳವಡಿಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ಬರುವುದನ್ನೇ ಕಾಯುತ್ತಿದ್ದರು. ಆದರೆ ಅಲ್ಲಿಯೂ ವಾಹನವನ್ನು ನಿಲ್ಲಿಸದೇ ಬ್ಯಾರಿಕೇಡ್‌ಗೆ ಗುದ್ದಿ ಆರೋಪಿಗಳು ಮುಂದುವರಿದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾಹನ ಗುದ್ದಿದ್ದ ರಭಸಕ್ಕೆ ಬ್ಯಾರಿಕೇಡ್ ಪೊಲೀಸ್ ಸಿಬ್ಬಂದಿ ಪ್ರಶಾಂತ್ ನಾಗಣ್ಣ ಅವರ ಕಾಲಿನ ಮೇಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಾರ್ವಜನಿಕ ಸಮಾರಂಭದಲ್ಲಿ ಅವಹೇಳನಕಾರಿ, ಅಸಾಂವಿಧಾನಿಕ ಹಾಗೂ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ ರಾಜ್ಯದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಸ್ ನಿಲ್ದಾಣದ ಬಳಿಯಲ್ಲಿ ಸಂಜೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಇಡೀ ವಿಶ್ವವೇ ಗುರುತಿಸಿದ ಹಾಗೂ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಈ ದೇಶ ಕಂಡ ಮಹಾನ್ ನಾಯಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಮಾತನಾಡಿರುವುದು ಸಚಿವರಿಗೆ ಶೋಭೆ ತರವಂತದ್ದಲ್ಲ. ಇದು ಅವರ ವಿಕೃತ ಮನಸ್ಸು ಹಾಗೂ ಕೀಳು ಸಂಸ್ಕೃತಿಯನ್ನು ತೋರಿಸುತ್ತದೆ. ಅಲ್ಪಸಂಖ್ಯಾತರನ್ನು ಓಲೈಸಿ ಓಟು ಗಿಟ್ಟಿಸಿಕೊಳ್ಳಲು ಸಿದ್ಧರಾಮಯ್ಯನವರು ರೋಷನ್ ಬೇಗ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾನ್ ಪುರುಷ ಡಾ. ಅಂಬೇಡ್ಕರ್‌ರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ವ್ಯವಸ್ಥೆ ಒಕ್ಕೂಟದಲ್ಲಿ ಮುಂದುವರಿಯಬೇಕು. ಈ ದೇಶದ ವ್ಯವಸ್ಥೆಗೆ ಪೂರಕ ವ್ಯವಸ್ಥೆ ಮತ್ತು ಯುವಜನರು ಉತ್ತಮ ಗುಣನಡತೆ, ಪ್ರೀತಿ ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು ಎಂದು ಬಿಇಒ ಕಛೇರಿಯ ಇ.ಸಿ.ಒ ವೆಂಕಪ್ಪ ಉಪ್ಪಾರ್ ಹೇಳಿದರು. ಖಂಬದಕೋಣೆ ಪಂಚಾಯತ್ ಸಭಾಭವನದಲ್ಲಿ ಖಂಬದಕೋಣೆ-ಹೇರಂಜಾಲು ವಲಯದ ಆದಿದ್ರಾವಿಡ ಸಂಘಟನಾ ಸಮಿತಿ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಎಂಬ ಕುಟುಂಬದ ಸದಸ್ಯರು ಹಾಗೂ ಯುವಜನರು ಶೈಕ್ಷಣಿಕವಾಗಿ ಮುಂದುವರಿಬೇಕು. ನಮ್ಮಲ್ಲಿ ಮೌಲ್ಯಯುತ ಶಿಕ್ಷಣದ ಕೊರತೆಯಿದ್ದು, ಜೀವನದಲ್ಲಿ ಉತ್ತಮ ಧ್ಯೇಯೊದ್ಧೇಶದಿಂದ ಕಾರ್ಯಕ್ಷಮತೆ ಕಡಿಮೆಯಾಗದ ಹಾಗೆ ಪ್ರಾಮಾಣಿಕವಾಗಿ ಮುಂದುವರಿಯಬೇಕಿದೆ. ಅನ್ಯ ಸಮಾಜದವರಿಗೆ ಕಿರುಕುಳ ನೀಡುವುದು, ಮೋಸ, ವಂಚನೆ ಮತ್ತು ರಾಜಕೀಯ ಗುಲಾಮಗಿರಿಯಿಂದ ಹಣಗಳಿಸುವ ವಿಚಾರಗಳಿಂದ ಹೊರಬಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಸಂಘಟನೆಯ ಮೂಲಕ ಅನುಸರಿಸಿ ಮುಖ್ಯವಾಹಿನಿಗೆ ಸೇರುವಂತಾಗಬೇಕು ಎಂದರು. ಸಂಘಟನೆಯ ಅಧ್ಯಕ್ಷ ರಾಮ ಬಾಳೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತ ಜನ್ಮದಿನದ ಪ್ರಯುಕ್ತ ಗಂಗೊಳ್ಳಿ ವಲಯ ಸವಿತಾ ಸಮಾಜ ಸಂಘ ಅಧ್ಯಕ್ಷ ಎಂ.ಶೇಖರ ಸುವರ್ಣ ಬಂಟ್ವಾಡಿ ನೇತೃತ್ವದಲ್ಲಿ ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ ವಠಾರ ಶ್ರಮದಾನದ ಮೂಲಕ ಸ್ವಚ್ಛಮಾಡಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಾದ ದಿನೇಶ್ ಭಂಡಾರಿ, ಶಂಕರ ಸುವರ್ಣ ತ್ರಾಸಿ, ರಾಜೇಶ್ ಸುವರ್ಣ, ಬಾಬು ಭಂಡಾರಿ, ಸತೀಶ ಭಂಡಾರಿ, ರಮೇಶ ಭಂಢಾರಿ, ಅಶೋಕ್ ಭಂಡಾರಿ, ಮಹಾಬಲ ಬಂಗೇರ, ಸುಧಾಕರ ಬಂಗೇರ, ರಾಮಕೃಷ್ಣ ಭಂಡಾರಿ, ಅಜಿತ್ ಭಂಡಾರಿ, ವಿಠಲ ಭಂಡಾರಿ, ರಕ್ಷತ್ ಸುವರ್ಣ, ಶೇಖರ ಸಾಲಿಯಾನ್, ಗಣೇಶ ಸಾಲಿಯಾನ್, ಭಾಸ್ಕರ ಭಂಡಾರಿ, ಸಂದೀಪ ಗಂಗೊಳ್ಳಿ, ನಾಗರಾಜ ಭಂಡಾರಿ, ಗೋಪಾಲ ಭಂಡಾರಿ, ಮಂಜುನಾಥ ಬಂಗೇರ, ಮಹೇಶ ಭಂಡಾರಿ, ನಾಗರಾಜ ಸುವರ್ಣ, ರತ್ನಾಕರ ಭಂಡಾರಿ, ಕಿರಣ ಭಂಡಾರಿ ಇನ್ನಿತರು ಉಪಸ್ಥಿತರಿದ್ದರು.

Read More