Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: ಸ್ವತಂತ್ರ ಆಗಸದಲ್ಲಿ ಹಾರಲು ಸಜ್ಜಾಗಿದೆ ತಿರಂಗಾ ಬಾವುಟ
    ವಿಶೇಷ ವರದಿ

    ಕುಂದಾಪುರ: ಸ್ವತಂತ್ರ ಆಗಸದಲ್ಲಿ ಹಾರಲು ಸಜ್ಜಾಗಿದೆ ತಿರಂಗಾ ಬಾವುಟ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ
    ಕುಂದಾಪುರ: ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಬಾವುಟಗಳ ಮಾರಾಟ ಆರಂಭಗೊಳ್ಳುತ್ತವೆ. ಶಾಲಾ ಕಾಲೇಜು, ಕಛೇರಿ, ವಾಹನ, ಮಕ್ಕಳು ಹೀಗೆ ಎಲ್ಲರಿಗಾಗಿಯೂ ವಿವಿಧ ಗಾತ್ರದ ಬಾವುಟಗಳಂತೂ ಬೇಕೆಬೇಕು. ಕುಂದಾಪುರದ ಹಳೆ ಬಸ್‌ಸ್ಟ್ಯಾಂಡಿನ ಬಳಿ ಹಳೆದ ಹದಿನೈದು ವರ್ಷಗಳಿಂದ ಅದೇ ಹಳೆಯ ಕಟ್ಟದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಕಾಣಸಿಗುವ ಅಬ್ದುಲ್‌ರ ಅಂಗಡಿಯಲ್ಲಿನ ತ್ರಿವರ್ಣ ಧ್ವಜಗಳಿಗಂತೂ ಕುಂದಾಪುರದಲ್ಲಿ ಭಾರಿ ಬೇಡಿಕೆ.

    Click Here

    Call us

    Click Here

    10ರೂಪಾಯಿಂದ ಆರಂಭಗೊಂಡು 500 ರೂಪಾಯಿ ವರೆಗಿನ ವಿವಿಧ ಗಾತ್ರದ ತ್ರಿವರ್ಣ ಧ್ವಜಗಳು ಈ ಮಾರ್ಗದಲ್ಲಿ ಸಾಗುವವನ್ನು ಒಂದು ಕ್ಷಣ ಆಕರ್ಷಿಸುತ್ತವೆ. ಪ್ರತಿವರ್ಷವೂ ಇಲ್ಲಿಯೇ ಸುಮಾರು ೬,೦೦೦ ಬಾವುಟಗಳು ಮಾರಾಟವಾಗುತ್ತಿವೆ. ಕಳೆದ ಹದಿನೈದು ವರ್ಷಗಳಿಂದಲೂ ನಡೆದು ಬಂದಿರುವ ಈ ಬಾವುಟದ ಮಾರಾಟ ಕೇವಲ ಲಾಭಕ್ಕಷ್ಟೇ ಅಲ್ಲ. ಅದೊಂದು ಹವ್ಯಾಸವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್. ಕುಂದಾಪ್ರ ಡಾಟ್ ಕಾಂ ವರದಿ

    ಒಂದು ಕಾಲದಲ್ಲಿ ಬಾವುಟಗಳಿಗೆ ದುಪ್ಪಟ್ಟು ಹಣ ನೀಡಬೇಕಿದ್ದುದನ್ನು ಕಂಡ ಅಬ್ದುಲ್ ಅವರೇ ಸ್ವತಃ ಕಡಿಮೆ ಬೆಲೆಗೆ ಬಾವುಟ ಮಾರಲು ಮುಂದಾದರು. 300-400 ಬಾವುಟಗಳಿಂದ ಆರಂಭಿಸಿ ಇಂದು 6000 ಬಾವುಟಗಳನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷದಲ್ಲಿ ಕೆಲವು ದಿನಗಳನ್ನು ಇದಕ್ಕೆಂದೇ ವ್ಯಯಿಸಿ ಸಂತೃಪ್ತಿ ಕಾಣುತ್ತಿದ್ದಾರೆ. ಗಂಗೊಳ್ಳಿಯವರಾದ ಅಬ್ದುಲ್, ಕುಂದಾಪುರದ ಹಂಗಳೂರಿನಲ್ಲಿ ನೆಲೆಸಿದ್ದು, ಪೇಟ, ಬಾವುಟ ಮಾರಾಟದೊಂದಿಗೆ ಇತರ ಉದ್ಯೋಗ ಮಾಡಿಕೊಂಡಿದ್ದಾರೆ.

    ಕುಂದಾಪುರಕ್ಕೆ ಮೊದಲು ರೆಡೆಮೇಡ್ ಪಾಲಿಸ್ಟರ್ ಪೇಟ ಪರಿಚಯಿಸಿದ್ದರು:
    ಮೊದಲೆಲ್ಲಾ ಮದುವೆಯ ಸಂದರ್ಭದಲ್ಲಿ ಮದುಮಗನಿಗೆ ನೇರಳೆ ಬಣ್ಣದ ಕಾಟನ್ ಬಟ್ಟೆಯಿಂದ ಪೇಟವನ್ನು ಕಟ್ಟುವ ಪರಿಪಾಠವಿತ್ತು. ೧೯೮೫ರ ಸುಮಾರಿಗೆ ಅಬ್ದುಲ್ ಮೊದಲ ಬಾರಿಗೆ ಮದುಮಗನ ಪೇಟಕ್ಕೆ ನೇರಳೆ ಬಣ್ಣದ ಕಾಟನ್ ಬಟ್ಟೆಯ ಬದಲಿಗೆ ಕ್ರೀಮ್ ಬಣ್ಣದ ಪಾಲಿಸ್ಟರ್ ರೇಡಿಮೆಡ್ ಪೇಟವನ್ನು ತಯಾರಿಸಿದ್ದರು. ಆಗಷ್ಟೇ ಮದುವೆ ಸಮಾರಂಭಗಳಿಗೆ ವಿಡಿಯೋ ಪರಿಚಯವಾಗುತ್ತಿದ್ದ ಕಾಲದಲ್ಲಿ ಇವರ ರೆಡೆಮೇಡ್ ಪೇಟ್ ಮದುಮಗನಿಗೆ ವಿಶೇಷ ಮೇರಗು ನೀಡಿದಂತಾಗುತ್ತಿತ್ತು. ಹಾಗಾಗಿ ಇವರ ಪೇಟಗಳಿಗೂ ಭಾರಿ ಬೇಡಿಕೆ ಬಂದಿದ್ದವು. ಮಂಗಳೂರಿನ ಕುಲ್ಯಾಡಿಕಲ್ ಬಟ್ಟೆಮಳಿಗೆಯಲ್ಲಿ ಇವರು ತಯಾರಿಸುತ್ತಿದ್ದ ಪೇಟಕ್ಕೆ ಭಾರಿ ಬೇಡಿಕೆ ಇದ್ದವು/ಕುಂದಾಪ್ರ ಡಾಟ್ ಕಾಂ ವರದಿ/
    Indian Flag - Kundapura - Abdul - Kundapur (1) Indian Flag - Kundapura - Abdul - Kundapur (2) Indian Flag - Kundapura - Abdul - Kundapur (3) Indian Flag - Kundapura - Abdul - Kundapur (4) Indian Flag - Kundapura - Abdul - Kundapur (6)Indian Flag - Kundapura - Abdul - Kundapur (5) Flag-sale-in-kundapur

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d