ವಿದ್ಯಾರ್ಥಿನಿಯರಿಗಾಗಿ ‘ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ’

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ.

Call us

Click Here

ವಿದ್ಯಾರ್ಥಿನಿಯರಲ್ಲಿ ಕಾರ್ಟೂನು ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿಯರಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ.

ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿನಿಯರು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಚಿಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿನಿಯರೇ ತರಬೇಕಿದ್ದು, ಸ್ವರ್ಧೆಯಲ್ಲಿ ಆಯ್ಕೆಗೊಂಡ ಮೂರು ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply