Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ದೇವಾಡಿಗ ಸಂಘಕ್ಕೆ 90ರ ಸಂಭ್ರಮ, ಸಾಧಕರಿಗೆ ಪ್ರಶಸ್ತಿ
    ಮುಂಬೈ

    ದೇವಾಡಿಗ ಸಂಘಕ್ಕೆ 90ರ ಸಂಭ್ರಮ, ಸಾಧಕರಿಗೆ ಪ್ರಶಸ್ತಿ

    Updated:16/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ 90ನೇ ವಾರ್ಷಿಕೋತ್ಸವ ಸಮಾರಂಭವು ಎ. 18 ಮತ್ತು 19ರಂದು ನವಿಮುಂಬಯಿ ನೆರೂಲ್‌ನ ದೇವಾಡಿಗ ಭವನದಲ್ಲಿ ಅದ್ದೂರಿಯಾಗಿ ಜರಗಲಿದೆ.

    Click Here

    Call us

    Click Here

    ಈ ಬಗ್ಗೆ ನಗರದ ದಾದರ್‌ನಲ್ಲಿರುವ ದೇವಾಡಿಗ ಸಂಘದ ಕಾರ್ಯಾಲಯದಲ್ಲಿ ಸಂಘದ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಡಿಗ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್‌ ಅವರು ಸಂಘದ ಸ್ಥಾಪಕರನ್ನು ಸ್ಮರಿಸಿದರಲ್ಲದೆ, 2007ರ ಸಮಯದಲ್ಲಿ ಧರ್ಮಪಾಲ… ದೇವಾಡಿಗರ ಅಧ್ಯಕ್ಷೀಯ ಅವಧಿಯಲ್ಲಿ ದೇವಾಡಿಗ ಭವನ ನಿರ್ಮಾಣಗೊಂಡಿದ್ದು ಸಂಘಟನೆಯಲ್ಲಿ ಒಂದು ಉತ್ತಮ ಬದಲಾವಣೆಯಾಗಿದೆ ಎಂದರು. ಮುಂಬಯಿಯಲ್ಲಿ ಮಾತ್ರವಲ್ಲದೆ ತವರೂರಲ್ಲೂ ಈ ಸಂಘದ ಮೂಲಕ ಆರೋಗ್ಯ ಮಾಹಿತಿ ಶಿಬಿರವನ್ನು ಪ್ರಾರಂಭಿಸಲಾಗಿದೆ. 2010 – 11ರಲ್ಲಿ ಅಲ್ಪಾವಧಿಯಲ್ಲೇ ಹತ್ತು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿ ಸಂಘದ ಕಾರ್ಯಕರ್ತರು ಸದಸ್ಯರ ಮನೆಗೆ ತಲಪಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತಾಗಿದೆ. ಪ್ರತೀ ವರ್ಷ ಸಮಾಜದ 5 – 6 ಅರ್ಹ ಮಕ್ಕಳನ್ನು ಈ ಸಂಸ್ಥೆ ಶಿಕ್ಷಣಕ್ಕಾಗಿ ದತ್ತು ಸ್ವೀಕರಿಸುತ್ತಿರುದನ್ನು ಪತ್ರಕರ್ತರ ಗಮನಕ್ಕೆ ತರಲಾಯಿತು. ನಮ್ಮ ಉದ್ದೇಶವು ಯುವ ಪೀಳಿಗೆಯನ್ನು ತಲುಪಲು ದೇವಾಡಿಗ ಅಧಿವೇಶನದಲ್ಲಿ ವಿಷನ್‌ – 2025 ಅನ್ನು ಮಾಲತಿ ವಿ. ಮೊಲಿ ಅವರ ಹಸ್ತದಿಂದ ಎ. 19ರಂದು ಉದ್ಘಾಟಿಸಲಿದ್ದೇವೆ. ಸಮಾಜದ ಪ್ರತಿ ಮಕ್ಕಳು ಶೈಕ್ಷಣಿಕವಾಗಿ ಕನಿಷ್ಠ ಪದವಿಯನ್ನಾದರೂ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದ ಅವರು, ಮನೆಯಲ್ಲಿರುವ ಮಹಿಳೆಯರ ಆರೋಗ್ಯ ರಕ್ಷಣೆಗೆ ಸೂಕ್ತ ಉಪಾಯವನ್ನು ಕೈಗೊಳ್ಳುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವೂ ನಮ್ಮದಾಗಿದೆ ಎಂದರು.

    ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಅವರ ಹಸ್ತದಿಂದ ಪ್ರಶಸ್ತಿ ವಿತರಣಾ ಸಮಾರಂಭವು ನಡೆಯಲಿದೆ. ಸಮಾಜದ 9 ಮಂದಿ ಯಶಸ್ವೀ ಉದ್ಯಮಿಗಳಿಗೆ ಉದ್ಯೋಗ ರತ್ನ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 16 ಮಂದಿಗೆ ದೇವಾಡಿಗ ಶ್ರೀ, ನಾಲ್ಕು ಮಂದಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ದೇವಾಡಿಗ ಕ್ರೀಡಾ ಭೂಷಣ, ಇತರ ಸಮಾಜದ ಐವರು ಸಾಧಕರಿಗೆ ದೇವಾಡಿಗ ಸನಿ¾ತ್ರ, 8 ಮಂದಿಗೆ ಸಾಧನ ಪ್ರಶಸ್ತಿ, 65 ವರ್ಷಕ್ಕಿಂತ ಹಿರಿಯರಾದ ಸಂಘದ ಮಾಜಿ ಅಧ್ಯಕ್ಷರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.

    ವಿವಿಧ ಗೋಷ್ಠಿಯಲ್ಲಿ ಸೆಲೆಬ್ರೇಶನ್‌ ಸಮಿತಿ ಕಾರ್ಯಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಅಧ್ಯಕ್ಷ ವಾಸು ಎಸ್‌. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ. ದೇವಾಡಿಗ, ಗೋಪಾಲ ಮೊಲಿ, ಗಣೇಶ್‌ ಶೇರಿಗಾರ್‌, ಮೋಹನದಾಸ್‌ ಅತ್ತಾವರ್‌, ಕೆ. ಎನ್‌. ದೇವಾಡಿಗ, ರವಿ ದೇವಾಡಿಗ, ಅಶೋಕ್‌ ತಿಮ್ಮಪ್ಪ ದೇವಾಡಿಗ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಕೋಟಿ-ಚೆನ್ನಯ ಕ್ರೀಡೋತ್ಸವ ಉದ್ಘಾಟನೆ

    11/01/2023

    ಬಿಲ್ಲವ ಸೇವಾ ಸಂಘ ಮುಂಬಯಿ ನೂತನ ಕಾರ್ಯದರ್ಶಿಯಾಗಿ ಅಶೋಕ ಎನ್. ಪೂಜಾರಿ ಆಯ್ಕೆ

    26/09/2020

    ಮುಂಬಯಿ: ರಾಜು ಶ್ರೀಯಾನ್ ನಾವುಂದ ವಿಧಿವಶ

    23/07/2020
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.