Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕವಿತೆಗಳೊಂದಿಗೆ ಜನರನ್ನು ಬೆಸೆದ ಗಾಯಕ
    ಕಲೆ-ಸಂಸ್ಕೃತಿ

    ಕವಿತೆಗಳೊಂದಿಗೆ ಜನರನ್ನು ಬೆಸೆದ ಗಾಯಕ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ನವೋದಯದ ಪ್ರಮುಖ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮತ್ತಿತರರ ಗೀತೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದವರೇ ಕಾಳಿಂಗರಾಯರು. ಹಳ್ಳಿ, ಪಟ್ಟಣಗಳಲ್ಲಿ ಹಾಡುತ್ತಾ ಸಾಗಿದ ರಾಯರು ಭಾವಗೀತೆ ಪ್ರಕಾರವನ್ನು ಜನಪ್ರಿಯಗೊಳಿಸಿದರು. ಅವರ ಹಾಡುಗಾರಿಕೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ವಿದ್ಯೆಯಿಂದ ವಂಚಿತರಾದ ಲಕ್ಷಾಂತರ ಕನ್ನಡಿಗರಿಗೆ ಕಾಳಿಂಗರಾಯರು ಮತ್ತು ಬಾಳಪ್ಪ ಹುಕ್ಕೇರಿ ಅವರ ಹಾಡುಗಾರಿಕೆಯಿಂದ ನವೋದಯ ಸಾಹಿತ್ಯ ಪರಿಚಯವಾಯ್ತು. ಈ ಕಾರಣಕ್ಕಾಗಿ ಕನ್ನಡಿಗರು ಇವರಿಬ್ಬರಿಗೆ ಕೃತಜ್ಞರಾಗಿರಬೇಕು.

    Click Here

    Call us

    Click Here

    ಕಾಳಿಂಗರಾಯರು ಶಾಸ್ತ್ರೀಯ ಸಂಗೀತ ವಾತಾವರಣದಲ್ಲಿ ಬೆಳೆದುಬಂದವರು. ಅವರಿಗೆ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿಯಿತ್ತು. ಈ ಹಿನ್ನೆಲೆಯೊಂದಿಗೆ ಭಾವಗೀತೆ ಪ್ರಪಂಚಕ್ಕೆ ಕಾಲಿಟ್ಟ ಅವರು ನಂತರದ ಗಾಯನ ಪ್ರತಿಭೆಗಳಿಗೆ ಮಾದರಿಯಾದರು. ಸಿನಿಮಾ ಕ್ಷೇತ್ರದಲ್ಲೂ ಪಿ.ಕಾಳಿಂಗರಾವ್ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನವೋದಯ ಕವಿಗಳ ಅರ್ಥಪೂರ್ಣ ಗೀತೆಗಳು ಸಿನಿಮಾಗೆ ಪರಿಚಯವಾಗಿದ್ದೇ ಕಾಳಿಂಗರಾಯರ ಮೂಲಕ. ಹತ್ತಾರು ಭಾವಗೀತೆಗಳು ಅವರ ಕಂಠಸಿರಿಯಲ್ಲಿ ಬೆಳ್ಳಿತೆರೆಗೆ ಅಳವಡಿಸಲ್ಪಟ್ಟಿವೆ. ಮುಂದೆ ಮೈಸೂರು ಅನಂತಸ್ವಾಮಿ, ಗುಣಸಿಂಗ್, ಸಿ.ಅಶ್ವಥ್ ಮತ್ತಿತರೆ ಸಂಗೀತಗಾರರು ಕಾಳಿಂಗರಾಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರು. ಈ ಮೂಲಕ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳ ಬಾಂಧವ್ಯ ಗಟ್ಟಿಯಾಯ್ತು.

    ಸಾಹಿತ್ಯವನ್ನು ತಲುಪಿಸುವ ವಾಹಕವಾಗಷ್ಟೇ ಸಂಗೀತ ಕೆಲಸ ಮಾಡಬೇಕು ಎನ್ನುವುದು ಕಾಳಿಂಗರಾಯರ ನಿಲುವು. ತಬಲ, ಹಾರ್ಮೋನಿಯಂನಂಥ ಕೆಲವೇ ವಾದ್ಯಗಳ ಬಳಕೆ ಮಾಡುತ್ತಿದ್ದ ಅವರಿಗೆ ಸಾಹಿತ್ಯವೇ ಮುಖ್ಯ. ಸಂಗೀತವನ್ನು ಅತಿ ಮಾಡದೆ, ಸಾಹಿತ್ಯವನ್ನು ಜನರಿಗೆ ಮುಟ್ಟಿಸಬೇಕೆನ್ನುವುದು ಅವರ ಕಾಳಜಿ. ಕಾಳಿಂಗರಾಯರ ಸಿನಿಮಾ ಗೀತೆಗಳಲ್ಲಿಯೂ ಈ ಅಂಶವನ್ನು ನಾವು ಗುರುತಿಸಬಹುದು. ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನಾನು ಅವರ ಅಭಿಮಾನಿಯಾಗಿದ್ದೆ. ವೈಯಕ್ತಿಕವಾಗಿ ನನ್ನ ಹಾಡುಗಾರಿಕೆಯ ಮೇಲೂ ಅವರ ಪ್ರಭಾವವಿದೆ.

    ಸ್ನೇಹಪರ ವ್ಯಕ್ತಿತ್ವದ ಕಾಳಿಂಗರಾಯರು ಶಿಸ್ತಿನ ವ್ಯಕ್ತಿ. ಸಂಗೀತಕ್ಕಿಂತ ಸಾಹಿತ್ಯವೇ ಪ್ರಧಾನವಾಗಿರಬೇಕೆನ್ನುವ ಅವರ ಆಶಯವೇ ಭಾವಗೀತ ಪ್ರಪಂಚಕ್ಕೆ ದೊಡ್ಡ ಆಸ್ತಿ. ಈ ಶ್ರೀಮಂತ ಪರಂಪರೆ ಮುಂದುವರೆಯಬೇಕು. ಈಗಿನ ಯುವ ಸಂಗೀತಗಾರರು ಟ್ಯೂನ್ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಇದರಿಂದ ಗೀತೆಗೆ ಸಿಗಬೇಕಾದ ಭಾವ ದಕ್ಕುವುದಿಲ್ಲ. ಇವರಿಗೆಲ್ಲಾ ಕಾಳಿಂಗರಾಯರು ಮಾದರಿಯಾಗಬೇಕು. ಇದೇ ಮೇರು ಗಾಯಕನಿಗೆ ನಾವು ಸಲ್ಲಿಸಬಹುದಾದ ಗೌರವ.

    ಜನ್ಮ ಶತಮಾನೋತ್ಸವ
    ಸುಗಮ ಸಂಗೀತ, ಚಿತ್ರಸಂಗೀತಕ್ಕೆ ದೊಡ್ಡ ಕೊಡುಗೆಯಿತ್ತ ಕಾಳಿಂಗರಾಯರ ಜನ್ಮಶತಮಾನೋತ್ಸವದ ವರ್ಷವಿದು. ತನ್ನಿಮಿತ್ತ ಹೊಂಬಾಳೆ ಪ್ರತಿಭಾರಂಗ ‘ಭಾವ – ಚಿತ್ರ – ನಮನ’ ಎರಡು ದಿನಗಳ ಕಾರ್ಯಕ್ರಮಗಳೊಂದಿಗೆ ಅವರನ್ನು ಸ್ಮರಿಸುತ್ತಿದೆ. ಇಂದು ಸಂಜೆ 4ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡಿನ ಖ್ಯಾತ ಗಾಯಕ, ಗಾಯಕಿಯರಿಂದ ಕಾಳಿಂಗರಾಯರಿಗೆ ಗೀತ ನಮನ.

    Click here

    Click here

    Click here

    Call us

    Call us

    (ಶಿವಮೊಗ್ಗ ಸುಬ್ಬಣ್ಣ ಖ್ಯಾತ ಗಾಯಕರು, ನಿರೂಪಣೆ ಶಶಿಧರ. ಕೃಪೆ: ವಿಕ)

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ದುಬೈನಲ್ಲಿ ಅದ್ದೂರಿಯಾಗಿ ಜರುಗಿದ ಅಂತರಾಷ್ಟ್ರೀಯ ಜಾನಪದ ಉತ್ಸವ – 25

    12/09/2025

    ಬಯಲಾಟ ಯು.ಕೆ. ತಂಡದಿಂದ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಯಶಸ್ವಿ ಪ್ರದರ್ಶನ

    07/12/2022

    ಅಥ್ಲೇಟಿ ಅಶ್ವಿನಿ ಅಕ್ಕುಂಜಿಗೆ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ

    16/11/2022

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d